ಸುಳ್ಯದಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಪಕ್ಷದ ಹುದ್ದೆಯ ಜೊತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೂ ರಾಜಿನಾಮೆ ನೀಡಿ ಹತ್ಯೆಯನ್ನು ಖಂಡಿಸಲಿ ಎಂದು ಕಳಸ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಹೇಶ್ ಆಗ್ರಹಿಸಿದ್ದಾರೆ.
ತನ್ನ ಪಂಚಾಯಿತಿ ಅಧ್ಯಕ್ಷೆ ಅಧಿಕಾರವನ್ನು ಇಟ್ಟುಕೊಂಡು ಪ್ರಯೋಜನಕ್ಕೆ ಬಾರದೆ ಇರುವ ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿ ಖಂಡನೆ ಮಾಡುವುದು ಸರಿಯಲ್ಲ.ನೀವು ನಿಜವಾಗಿಯೂ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ರಾಜಿನಾಮೆ ನೀಡುವುದಾದರೆ ನಿಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಎಂದಿದ್ದಾರೆ.
ಅಲ್ಲದೆ ಜು 29ರ ಶುಕ್ರವಾರದಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರೆ ನೀಡಿರುವ ಕಳಸ ಬಂದ್ಗೆ ಕಳಸ ಯುವ ಕಾಂಗ್ರೆಸ್ನಿಂದ ಬೆಂಬಲ ನೀಡುವುದಿಲ್ಲ.ಕಳೆದ ಕೆಲ ದಿನಗಳ ಹಿಂದೆ ನಡೆದ ಮಸೂದ್ ಕೊಲೆಯಲ್ಲೂ ಕೂಡ ಒಂದು ಜೀವವೇ ಹೋಗಿರುವುದು,ಪ್ರವೀಣ್ ಮಟ್ಟೂರ್ದು ಕೂಡ ಒಂದು ಜೀವವೆ ಆಗಿದೆ.ಆದ್ದರಿಂದ ನಾವು ಎರಡು ಹತ್ಯೆಯನ್ನೂ ಕೂಡ ಖಂಡಿಸುತ್ತೇವೆ.ಆದರೆ ಒಂದು ಹತ್ಯೆಯನ್ನು ಮಾತ್ರ ಖಂಡಿಸಿ ನಡೆಸುವ ಬಂದ್ಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.