ಕಳಸ ಸುತ್ತಮುತ್ತ ಗಂಟು ನೋವು,ಕಾಲು ನೋವುಗಳಿಗೆ ಔಷಧಿ ಕೊಡುತ್ತೇನೆಂದು ಹೇಳಿ ಹಣ ಪಡೆದುಕೊಂಡು ನಂತರ ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ಕಳಸ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಜಾವಗಲ್ ಮೂಲದ ರವಿ ಎಂದು ಗುರುತಿಸಲಾಗಿದೆ.
ತನೂಡಿ ಗ್ರಾಮದಲ್ಲಿ ಕಾಲು ನೋವಾಗಿದ್ದ ವ್ಯಕ್ತಿಯೊಬ್ಬರಿಗೆ ಔಷಧಿ ಕೊಡುತ್ತೇನೆಂದು 35 ಸಾವಿರ ಹಣ ಪಡೆದುಕೊಂಡು ನಂತರ ವಂಚಿಸಿದ್ದ.ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆರೋಪಿಯನ್ನು ಬಂದಿಸಿದ್ದಾರೆ.
ಆರೋಪಿಯು ಇದೇ ರೀತಿ
ಚಿಕ್ಕಮಗಳೂರು,ಹಾಸನ,ಮೈಸೂರು ಭಾಗಗಳಲ್ಲೂ ವಂಚಿಸಿದ್ದ ಎಂದು ತಿಳಿದು ಬಂದಿದೆ.
ಆರೋಪಿಯಿಂದ 20 ಸಾವಿರ ನಗದು,2 ಮೊಬೈಲ್, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಚರಣೆಯಲ್ಲಿ ಪಿಎಸ್ಐ. ಹರ್ಷವರ್ಧನ್ ಸಿಬ್ಬಂದಿಗಳಾದ ಮಲ್ಲೇಶ್,ಜಯಕುಮಾರ್,ಉಮೇಶ್, ಅನಿಲ್ ಇದ್ದರು.