ಪ್ರವೀಣ್ ನೆಟ್ಟಾರ್ ಕೊಲೆಗೆ ಅಸಮಾದಾನ ವ್ಯಕ್ತ ಪಡಿಸಿ ಪಕ್ಷದ ಕಾರ್ಯಕರ್ತರು ವಿವಿಧ ಹುದ್ದೆಗಳಿಗೆ ರಾಜಿನಾಮೆ ಕೊಟ್ಟ ಬೆನ್ನಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಸ್ಟೇಟಸ್ ಮೂಲಕ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
“ನಮ್ಮದೇ ಸರ್ಕಾರ!, ನಮ್ಮದೇ ಕಾರ್ಯಕರ್ತರ ಕೊಲೆ!, ನನಗೆ ಹೇಳಿ ಕೊಳ್ಳಲು ನಾಚಿಕೆಯಾಗುತ್ತಿದೆ! ಕ್ಷಮಿಸಿ ಬಿಡು ಪ್ರವೀಣ್..” ಎಂಬುದಾಗಿ ಅವರು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಹಲವರು ಪ್ರತಿಕ್ರೀಯಿಸಿ ರಾಜಿನಾಮೆ ಕೊಟ್ಟುಬಿಡಿ ಎಂದು ಒತ್ತಾಯಿಸಿದ್ದಾರೆ.