ಕಳಸ ತಾಲ್ಲೂಕಿನ ಹಿರೇಬೈಲ್ ಸಂತ ಜೋಸೆಫರ ಚರ್ಚಿನ ಧರ್ಮಗುರು ಜಾರ್ಜ್ ಅಂದ್ರಾದೆ ಅವರು ನಿವೃತ್ತರಾಗಿ ಬೆಂಗಳೂರಿಗೆ ಬೆಂಗಳೂರಿಗೆ ತೆರಳುತ್ತಿರುವ ಹಿನ್ನಲೆಯಲ್ಲಿ ಭಾನುವಾರ ಅವರನ್ನು ಚರ್ಚಿನ ಭಕ್ತಾಧಿಗಳ ವತಿಯಿಂದ ಸನ್ಮಾನಿಸಲಾಯಿತು.
ಫಾದರ್ ಜಾರ್ಜ್ ಅಂದ್ರಾದೆ ಅವರು ಹಿರೇಬೈಲ್ ಸೇರಿ ಮೂಡಿಗೆರೆ,ಗೋಣಿಬೀಡು,ಮರಿಯಾನಗರ,ಹಾಸನ,ಸಾಗರ ಮತ್ತಿತರ ಧರ್ಮಕೇಂದ್ರಗಳಲ್ಲಿ ಒಟ್ಟು 46 ವರ್ಷಗಳ ಗುರು ಸೇವೆ ನೀಡಿದ್ದಾರೆ.ಹಿರೇಬೈಲಿನಲ್ಲಿ ಏಳು ವರ್ಷಗಳ ಸೇವೆ ನೀಡಿ ನಿವೃತ್ತರಾಗುತ್ತಿರುವ ಇವರಿಗೆ ಪಾಲನಾ ಸಮಿತಿ ಹಾಗೂ ಚರ್ಚ್ ಭಕ್ತವೃಂದ, ಪೀಠ ಸೇವಕರು, ಸ್ಥಳೀಯ ಧರ್ಮಭಗಿನಿಯರು, ನಾಗರೀಕ ಸೇವಾ ಸಮಿತಿ, ಕಥೋಲಿಕ ಕೊಂಕಣಿ ರಾಕಣ್ ಸಂಚಲನ,ವಿನ್ಸೆಂಟ್ ದಿ ಪೌಲ್ ಸಮಿತಿ ವಿವಿಧ ಸಂಸ್ಥೆಗಳ ವತಿಯಿಂದ ಗುರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.ಹಿರೇಬೈಲ್ ಚರ್ಚ್ ಗೆ ನೂತನ ಗುರುಗಳಾಗಿ ಫಾ.ಡೇವಿಡ್ ಪ್ರಕಾಶ್ ಅಧಿಕಾರ ವಹಿಸಲಿದ್ದಾರೆ.