ಕಳಸ ಅರಣ್ಯ ಇಲಾಖೆ ಗೋದಾಮಿನಿಂದ ಕಳೆದ ವಾರ ಕಳ್ಳತನವಾಗಿದ್ದ ಶ್ರಿಗಂದ ಕಳ್ಳತನ ಮಾಡಿದ್ದ ಇಬ್ಬರನ್ನು ಕಳಸ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಶಿವಮೊಗ್ಗ ಜಿಲ್ಲೆ ಹುಣಸೆಕಟ್ಟೆ ಸಾದಿಕ್ ಮತ್ತು ಸಾಗರ್ ಎಂದು ಗುರುತಿಸಲಾಗಿದೆ.ಬಂಧಿತರಿಂದ 35 ಕೆ.ಜಿ ಶ್ರೀಗಂದ ವಶಪಡಿಸಿಕೊಳ್ಳಲಾಗಿದೆ ಎಂದು ಕಳಸ ಪೊಲೀಸ್ ಠಾಣಾಧಿಕಾರಿ ಹರ್ಷವರ್ಧನ್ ತಿಳಿಸಿದ್ದಾರೆ.ಕಳೆದ ವಾರ ಕಳಸ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಕಚೇರಿಗೆ ಹೊಂದಿಕೊಂಡಿರುವ ಗೋದಾಮಿನಿಂದ 197 ಕೆ.ಜಿ.ಶ್ರೀಗಂಧ ಕಳ್ಳತನವಾಗಿತ್ತು.ಈ ಪ್ರಕರಣದಲ್ಲಿ ಐದು ಮಂದಿ ಭಾಗಿಯಾಗಿದ್ದರು.ಉಳಿದ ಮೂವರಿಗೆ ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ.
ಕುದುರೆಮುಖ ಪ್ರಭಾರಿ ವೃತ್ತನಿರೀಕ್ಷಕ ರವಿ.ಸಿ.ಎನ್ ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಕಳಸ ಪಿಎಸ್ಐ ಹರ್ಷವರ್ಧನ್,ಸಿಬ್ಬಂದಿಗಳಾದ ಜಯಕುಮಾರ್,ಉಮೇಶ್ ಇದ್ದರು.
ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ.