ಚಿಂತನ್ ಎಸ್.ಆರ್ ಕಾರ್ಯಕ್ರಮದ ನಿರೂಪಣೆಯಲ್ಲಿ ಅತೀ ಹೆಚ್ಚು ಕೇಳಿ ಬರುತ್ತಿರುವ ಹೆಸರು.
ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ.ಕಾಲೇಜಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲೂ ನಿರೂಪಣೆಯಲ್ಲಿ ಮೊದಗಲಿಗರಾಗಿ ಕಂಡು ಬರುವವರು ಇವರು,ತನ್ನ ಮಾತಿನ ವೈಭವಗಳ ಮೂಲಕ ಪ್ರೇಕ್ಷಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಮಾತಿನ ತಂತ್ರಗಾರಿಕೆ ಇವರಲ್ಲಿದೆ.
ಇವರ ಪರಿಚಯ ತಿಳಿಸುವುದಾದರೆ ಕಳಸ ತಾಲ್ಲೂಕಿನ ಸಂಸೆಯವರಾದ ಇವರು ರಾಮಚಂದ್ರ ಹಾಗೂ ಶ್ರೀಲತಾ ದಂಪತಿಗಳ ಪುತ್ರ.ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಂಸೆಯಲ್ಲಿ ಮುಗಿಸಿ,ಪಿಯುಸಿ ಶಿಕ್ಷಣವನ್ನು ಜೆಸಿಬಿಎಂ ಶ್ರಿಂಗೇರಿ ಕಾಲೇಜಿನಲ್ಲಿ ಮುಗಿಸಿ ಈಗ ಪ್ರಸ್ತುತ ಕಳಸ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿಯಾಗಿದ್ದಾರೆ.
ಬಾಲ್ಯದಿಂದಲೇ ಅತ್ಯಂತ ಸೌಮ್ಯ ಮತ್ತು ಮೃದು ಸ್ವಭಾವದವರಾಗಿದ್ದ ಇವರು ಶಾಲಾ ಪ್ರಾಥಮಿಕ ಹಂತದಲ್ಲಿಯೇ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿ ಸೈ ಎಣಿಸಿಕೊಂಡವರು.ಒಂದು ಕಾರ್ಯಕ್ರಮದ ಜೀವಾಳವೇ ನಿರೂಪಣೆ.ಇಲ್ಲಿ ವ್ಯಕ್ತಿತ್ವದಷ್ಟೇ ಮುಖ್ಯವಾಗಿರುವುದು ಸ್ಪಷ್ಟ ಉಚ್ಛಾರ,ಎಲ್ಲರನ್ನು ಸೆಳೆಯಬಲ್ಲ ಕಂಠ, ನಿರೂಪಣೆ ಶೈಲಿ ಇದು ಚಿಂತನ್ ಬಳಿ ಇದೆ.ಕೇವಲ ನಿರೂಪಣೆಗೆ ಅಷ್ಟೇ ಸೀಮತವಲ್ಲದ ಇವರು ಡ್ರಾಯಿಂಗ್, ಹಾಡುಗಾರಿಕೆಯಲ್ಲೂ ಎತ್ತಿದ ಕೈ.
ಮಾತು ಮಗುವಂತೆ, ಮಾತು ಗಿರಿಯಂತೆ, ಮಾತು ಬೆಣ್ಣೆಯಂತೆ, ಮಾತು ಸುಂದರ ಕೃತಿಯಂತೆ, ಮಾತು ಜಗತ್ತನ್ನೆ ಆಡಿಸುವ ಸೂತ್ರವಂತೆ ಪ್ರಜ್ಞಾರಿಗೆ ಮಾತೇ ಜೀವದಂತೆ ಉಸಿರು ಉಸಿರಿನಲ್ಲೂ ಬೆರೆತಿರುವ ಇವರು ನಮ್ಮೂರಲ್ಲಿ ಬೆಳೆಯುತ್ತಿರುವ ನಮ್ಮೂರ ಪ್ರತಿಭೆ.
ಇವರನ್ನು ಕಳಸ ಲೈವ್ ಗುರುತಿಸಲು ಹೆಮ್ಮೆ ಪಡುತ್ತಿದೆ.ನಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇಂತಹ ಬೆಳೆಯುತ್ತಿರುವ ಪ್ರತಿಭೆಯನ್ನು ಕರೆಸಿ ಅವಕಾಶ ನೀಡಿ, ಪ್ರೋತ್ಸಾಹಿಸಿದ್ದಲ್ಲಿ ಮುಂದೊಂದು ದಿನ ಉತ್ತಮ ನಿರೂಪಕರಾಗಿ ನಮ್ಮೂರ ಪ್ರತಿಭೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸುವುದಲ್ಲಿ ಅನುಮಾನವೇ ಇಲ್ಲ.
ಇವರ ಮೋಬೈಲ್ ನಂ: 8660288690