ಕಳಸ:ಸಮಾಜದ ಅಂತರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಗೆ ನಮ್ಮ ಜೀವನವನ್ನು ಮುಡಿಪಾಗಿಟ್ಟಾಗ ನಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಕಾಣಬಹುದು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಬೀಮೇಶ್ವರ ಜೋಷಿ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ನಡೆದ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಪಧಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.
ರೋಟರಿ ಕ್ಲಬ್ನ ನೂತನ ಅಧ್ಯಕ್ಷ ಬಿ.ಆರ್.ಪ್ರಸನ್ನ ರವರಿಗೆ ನಿರ್ಗಮಿತ ಅಧ್ಯಕ್ಷ ಸಿ.ಕೆ.ಮೂರ್ತಿ ತನ್ನ ಅಧಿಕಾರವನ್ನು ಹಸ್ತಾಂತರಿಸಿದರು.
ನಿಯೋಜಿತ ಅಧ್ಯಕ್ಷ ಅರಿಂಜಯ ಜೈನ್ ,ಕಾರ್ಯದರ್ಶಿ ಹೆಚ್.ಜಿ.ಮಹೇಂದ್ರ, ,ಖಜಾಂಚಿ ಡಾ.ರಿತೇಶ್, ನಿರ್ಧೇಶಕರಾಗಿ ಸತ್ಯೇಂದ್ರ, ಕಿರಣ್ ಶೆಟ್ಟಿ, ಎನ್.ಎಂ.ಹರ್ಷ, ಡಾ.ಸಂತೋಷ್, ರಾಜಲಕ್ಷ್ಮೀ ಬಿ ಜೋಷಿ, ಸುಹಾನ್ ಜೈನ್, ಪಣೀಶ್, ಕೆ.ಕೆ.ಬಾಲಕೃಷ್ಣ, ಸುಗಮ್, ಗಿರಿಜಾ ಶಂಕರ್ ಜೋಷಿ, ವಿಕ್ರಮ್ ಪ್ರಭು.
ಇನ್ನರ್ ವೀಲ್ ಅಧ್ಯಕ್ಷೆ ಕವಿತಾ ಪ್ರಕಾಶ್,ಅವರಿಗೆ ನಿರ್ಗಮಿತ ಅಧ್ಯಕ್ಷೆ ಲೀಲಾ ಶ್ರೀಕಾಂತ್ ತನ್ನ ಅಧಿಕಾರ ಹಸ್ತಾಂತರಿಸಿದರು.
ಕಾರ್ಯದರ್ಶಿ ಸಂಧ್ಯಾ ರೀತೇಶ್, ಖಜಾಂಚಿ ನಳಿನಾಕ್ಷಿ, ಸಂಪಾದಕ ಮಳಾವಿಕಾ ಪ್ರಭು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀವಾಣಿ ಸುಗಮ್, ನಿತ್ಯ ಸಂಧೀಪ್, ಉಷಾ ಕುಮಾರ್, ರಾಜಲಕ್ಷ್ಮೀ ಜೋಷಿ, ವಿಧ್ಯಾ ಭಾಸ್ಕರ್, ಸುಜಾತ ಭಾಲಕೃಷ್ಣ, ವಾಸವೀ ಪ್ರಭಾಕರ್ ಪ್ರಮಾಣವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಗವರ್ನರ್ ಕೆ.ಟಿ.ವೆಂಕಟೇಶ್, ವಲಯ ಲೆಪ್ಟಿನೆಂಟ್ ಕೆ.ಆರ್.ಶ್ರೀಕರ ಇದ್ದರು.