ಕಳಸ -ಕುದುರೆಮುಖ ಮುಖ್ಯ ರಸ್ತೆಯ ನೆಲ್ಲಿಬಿಡು ತಿರುವಿನಲ್ಲಿ ಅಧಿಕ ಸಾಮರ್ಥ್ಯದ ಲಾರಿಯೊಂದು ನಿಂತಿರುವ ಪರಿಣಾಮ ಕೆಲಗಂಟೆಗಳ ಕಾಲ ವಾಹನ ಸಂಚಾರ ಕಡಿತಗೊಂಡಿತ್ತು.
ಇದರಿಂದ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು ಅಗತ್ಯ ಕೆಲಸಕ್ಕಾಗಿ ಕಾರ್ಕಳ, ಮಂಗಳೂರು ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಸ್ಥಳೀಯರ ನೆರವಿನಿಂದ ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಯಿತು.