ಕಳಸ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ತನೂಡಿ ಗ್ರಾಮದ ಪುಟ್ಟಯ್ಯ ಎಂಬುವವರ ಮನೆ ಕುಸಿತಗೊಂಡಿದೆ.
ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ತನೂಡಿ ಕಾಲನಿಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಪುಟ್ಟಯ್ಯನವರ ಮಂಗಳವಾರದ ರಾತ್ರಿ ಮನೆ ಕುಸಿದಿದೆ.
ಪುಟ್ಟಯ್ಯನವರಿಗೆ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರೆ ದಾಖಲಾತಿ ಗಳು ಇಲ್ಲದೆ ಇರುವುದರಿಂದ ಅವರಿಗೆ ಸರ್ಕಾರದಿಂದ ಸಿಗುವ ಮನೆ ಹಾಕಿಸಿಕೊಡಲು ಸಾಧ್ಯವಾಗಿರಲಿಲ್ಲ ಎನ್ನುತ್ತಾರೆ ತೋಟದೂರು ಗ್ರಾಮ ಪಂಚಾಯಿತಿ ಪಿಡಿಒ ಶರತ್.