ಚಿನ್ನವನ್ನು ಶುದ್ದಿಕರಿಸಲು ಇಟ್ಟ ರಾಸಾಯನಿಕ ನೀರನ್ನು ಕುಡಿದು ಹೆಣ್ಣು ಮಗುವೊಂದು ಮೃತ ಪಟ್ಟ ಘಟನೆ ಕಳಸ ತಾಲೂಕಿನ ಹಿರೇಬೈಲಿನಲ್ಲಿ ಶನಿವಾರ ನಡೆದಿದೆ.
ಮೃತ ಪಟ್ಟ ಮಗು ಅಸ್ಸಾಂ ಮೂಲದ ಓಮಿಲಾ ಕಾತೂನು(3) ಎಂದು ಗುರುತಿಸಲಾಗಿದೆ.
ಅಸ್ಸಾಂ ಮೂಲದ ಕುಟುಂಬವೊಂದು ಸ್ಥಳಿಯ ಎಸ್ಟೇಟ್ ನಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕೂಲಿ ಕೆಲಸ ಮಾಡುತ್ತಿದ್ದು, ಶನಿವಾರ ಪೋಷಕರು ಕಳಸ ತಾಲೂಕಿನ ಹಿರೇಬೈಲಿನ ಅಂಗಡಿಯೊಂದಕ್ಕೆ ದಿನಸಿ ಸಾಮಾನು ಖರೀದಿಸಲು ಬಂದಿದ್ದರು.ವಿಪರೀತ ಮಳೆ ಕಾರಣ ಪಕ್ಕದಲ್ಲಿ ಇದ್ದ ಚಿನ್ನದ ಅಂಗಡಿಯಲ್ಲಿ ನಿಂತಿದ್ದ ಸಂದರ್ಬದಲ್ಲಿ ಮಗು ಅಲ್ಲಿಯೇ ಬಾಟಲಿಯಲ್ಲಿದ್ದ ಚಿನ್ನ ಶುದ್ಧೀಕರಣ ಮಾಡುವ ನೀರನ್ನು ಕುಡಿದಿದೆ.ಸ್ವಲ್ಪ ಸಮಯದಲ್ಲಿ ಮಗು ಬೆವರಲು ಪ್ರಾರಂಭವಾದಗ ಮಗು ಚಿನ್ನ ಶುದ್ಧಿಕರಿಸುವ ನೀರನ್ನು ಕುಡಿದಿರುವುದು ಗಮನಕ್ಕೆ ಬಂದಿದೆ ಕೂಡಲೇ ಮಗುವನ್ನು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.