ಕಳಸ ವಲಯ ಅರಣ್ಯಾಧಿಕಾರಿ ಕಚೇರಿಗೆ ಹೊಂದಿಕೊಂಡ ಗೋದಾಮಿಗೆ ಶನಿವಾರ ಬೆಳಿಗ್ಗೆ ಕಳ್ಳರು ನುಗ್ಗಿದ್ದು ಶ್ರೀಗಂಧ ಕದ್ದೊಯ್ದಿದಾರೆ.
ಬೆಳಿಗ್ಗೆ ಇಲಾಖಾ ಸಿಬ್ಬಂದಿ ಕಚೇರಿಗೆ ಬಂದಾಗ ಪಕ್ಕದ ಗೋದಾಮಿನ ಮುಂಬಾಗಿಲ ಬೀಗ ಮುರಿದಿರುವುದು ಕಂಡು ಬಂತು. ಒಳಗಿನ ಶ್ರೀಗಂಧದ ಗೋದಾಮಿನ ಬೀಗವನ್ನು ಕೂಡ ಕಳ್ಳರು ಮುರಿದಿದ್ದು, ಶ್ರೀಗಂಧ ಕಳ್ಳತನ ಆಗಿರುವ ಶಂಕೆಯಿಂದ ಕಳಸ ಪೊಲೀಸರಿಗೆ ದೂರು ನೀಡಲಾಗಿತ್ತು.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕಚೇರಿ ಹಿಂದಿನ ಕಿಟಕಿ ಮೂಲಕ ಗಂಧ ಹೊರಗೆ ಸಾಗಿಸಿರಬಹುದು ಎಂದು ಅರಿತ
ಅವರು ಬೆರಳಚ್ಚು ತಜ್ಞರನ್ನು ಕರೆಸಿದರು. ಮಧ್ಯಾಹ್ನದ ನಂತರ ಬಂದ ತಜ್ಞರು ಬೆರಳಚ್ಚಿನ ಸುಳಿವಿಗಾಗಿ ಹುಡುಕಾಟ ನಡೆಸಿದರು. .
ಅನೇಕ ಪ್ರಕರಣಗಳಲ್ಲಿ ಜಪ್ತಿಯಾದ ಸುಮಾರು 800 ಕೆ.ಜಿ. ಶ್ರೀಗಂಧ ಇಲ್ಲಿತ್ತು. ಅದರಲ್ಲಿ 197 ಕೆ.ಜಿ ತೂಕದ 95 ಶ್ರೀಗಂಧದ ತು೦ಡುಗಳು ಕಳವಾಗಿದೆ .