ಮರಸಣಿಗೆಯ ಮುಖ್ಯ ರಸ್ತೆಯಲ್ಲಿ ಗುರುವಾರ ಬೆಳ್ಳಂ ಬೆಳಿಗ್ಗೆ ಹುಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬೆಳಿಗ್ಗೆ ಸುಮಾರು 5 – 30ರ ಸಮಯದಲ್ಲಿ ಹುಲಿ ಮುಖ್ಯ ರಸ್ರೆಯಲ್ಲಿ ನಿಂತಿತ್ತು.ಇದನ್ನು ಬೆಳಿಗ್ಗೆ ಬೆಂಗಳೂರಿನಿಂದ ಬರುವ ಪ್ರಯಾಣಿಕರು ನೋಡಿದ್ದಾರೆ.ಹುಲಿ ರಸ್ತೆ ದಾಟುವ ತನಕ ಬಸ್ಸನ್ನು ಕೆಲ ಕಾಲ ನಿಲ್ಲಿಸಿದ್ದಾರೆ.ನಂತರ ಮರಸಣಿಗೆಯಲ್ಲಿ ಇಳಿದ ಪ್ರಯಾಣಿಕರು ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆಯೂ ಮರಸಣಿಗೆ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಕೆಲ ಜಾನುವಾರುಗಳನ್ನು ಬಲಿ ಪಡೆದುಕೊಂಡಿತ್ತು. ಬೆಳಿಗ್ಗೆ ಮುಂಚೆ ಓಡಾಡುವವರು ಹಾಗೂ ತೋಟದ ಕೆಲಸದವರು ಎಚ್ಚರಿಕೆ ವಹಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ತಿಳಿಸಿದ್ದಾರೆ.