ಕಳಸ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಕಳಸ-ಹೊರನಾಡು ಮಧ್ಯೆ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡು ಕೆಲ ಕಾಲ ಪ್ರಯಾಣಿಕರು ತೊಂದರೆ ಅನುಭವಿಸಿದರು..
ಭಾನುವಾರದ ರಾತ್ರಿಯಿಂದಲೇ ಬಿರುಸಿನ ಮಳೆಯಾಗುತ್ತಿದ್ದು ಭದ್ರಾ ನೀರಿನ ಮಟ್ಟ ಈ ವರ್ಷದ ಗರಿಷ್ಟ ಮಟ್ಟಕ್ಕೆ ಏರಿಕೆಯಾಗಿದೆ. ಪರಿಣಾಮ ಸೋಮವಾರ ಕಳಸ-ಹೊರನಾಡು ಮಧ್ಯೆ ಭದ್ರಾ ನದಿಗೆ ಕಟ್ಟಿರುವ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿತ್ತು.ರಾತ್ರಿ ಸುರಿದ ಮಳೆಯಿಂದ ಬೆಳಗ್ಗಿನಿಂದಲೆ ಕೆಲ ಕಾಲ ಸೇತುವೆ ಮೇಲೆ ನೀರು ಹರಿಯಿತು.ಇದರಿಂದ ಕಳಸ-ಹೊರನಾಡು ರಸ್ತೆ ಸಂಪರ್ಕ ಕಡಿತಗೊಂಡಿತ್ತು.ಇದರಿಂದ ನೂರಾರು ಪ್ರವಾಸಿಗರು ಸಮಸ್ಯೆ ಎದುರಿಸಿದರು.
Related Stories
September 6, 2024