ಕಳಸ ರೋಟರಿ ಭವನದಲ್ಲಿ ಭಾನುವಾರ ನಡೆದ ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾಡಿದರು.
ಕೇಂದ್ರ ಸರ್ಕಾರದ ಎಂಟು ವರ್ಷಗಳ ಪಾರದರ್ಶಕತೆಯ, ಪರಿವರ್ತನೆಯ ಸಾಧನಾ ಪರ್ವವನ್ನು ಜನರ ಮುಂದಿಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡುತ್ತಿದ್ದೇವೆ,ಬಡತನ ನಿರ್ಮೂಲನೆಗೆ ಅನೇಕ ಯೋಜನೆಗಳನ್ನು ಕೃಷಿಕರಿಗೆ ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ ತಂದಿದ್ದಾರೆ.ಅವರ ಆಡಳಿತದಿಂದ ಅತ್ಯಂತ ಪರಿಣಾಮಕಾರಿ ಬದಲಾವಣೆಯನ್ನು ಕಾಣುತ್ತಿದ್ದೇವೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕುವಂತಾಗಿದೆ ಎಂದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ಕಳಸಕ್ಕೆ ಕೆಎಸ್ಆರ್ಟಿಸಿ ಬಸ್ಸು ಡಿಪೋ,ಕಳಸ ತಾಲ್ಲೂಕು ಕಚೇರಿ ಕಟ್ಟಡದೊಂದಿಗೆ ಕಳಸ ಪಟ್ಟಣ ಪಂಚಾಯಿತಿ ಆಗಲಿದೆ. ಕಳಸ-ಹೊರನಾಡು ಹೆಬ್ಬಾಳೆ ಸೇತುವೆಗೆ 15 ಕೋಟಿ ರೂ ಮಂಜೂರಾಗಿದ್ದು ಸದ್ಯದಲ್ಲಿಯೆ ಗುದ್ದಲಿ ಪೂಜೆ ನಡೆಯಲಿದೆ.ಅಲ್ಲದೆ ತಾಲೂಕಿನ ಎಲ್ಲಾ ಶಾಲೆಯ ದುರಸ್ಥಿಗಾಗಿ ತಲಾ 5ಲಕ್ಷ ರೂ ಅನುದಾನ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಕಳಸ ಬಿಜೆಪಿ ಅಧ್ಯಕ್ಷ ನಾಗಭೂಷನ್,ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ,ಮಂಡಲ ಬಿಜೆಪಿ ಅಧ್ಯಕ್ಷ ರಘು ಜನ್ನಾಪುರ,ಬಿಜೆಪಿ ಮುಖಂಡರಾದ ಎಂ.ಎ.ಶೇಷಗಿರಿ,ಗಿರೀಶ್ ಹೆಮ್ಮಕ್ಕಿ,ವೆಂಕಟಸುಬ್ಬಯ್ಯ,ಪಂಚಾಕ್ಷರಿ,ಗಜೇಂದ್ರ,ಸುಜಯಸದಾನಂದ,ಶಶಿದರ,ಮೋಹನ್,ವೃಷಭರಾಜ್ ಇದ್ದರು.
Related Stories
September 6, 2024