ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಉಪನಿರ್ದೇಶಕರ ಕಛೇರಿ ( ಅಭಿವೃದ್ಧಿ) ಇದರ ಅನುಭವನಾತ್ಮಕ ಕಲಿಕಾ ಯೋಜನೆಯಡಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಕಳಸ,ಇಲ್ಲಿನ ವಿದ್ಯಾರ್ಥಿಗಳು ಕಳಸ ಗ್ರಾಮಪಂಚಾಯತಿಗೆ ಭೇಟಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಳಸ ಗ್ರಾಮ ಪಂಚಾಯತ್ ಲೆಕ್ಕಪರಿಶೋಧಕ ಸಂತೋಷ್ ಗ್ರಾಮಪಂಚಾಯತ್ ರಚನೆ,ಅಧಿಕಾರ,ಕಾರ್ಯಗಳು,ಚುನಾವಣೆಗಳ ಕುರಿತು ಸಮಗ್ರವಾದ ಮಾಹಿತಿಯನ್ನು ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಯಾ ಸದಾನಂದ ಗ್ರಾಮಪಂಚಾಯತ್ ವ್ಯವಸ್ಥೆಯ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮನೋಭಾವ ಬೆಳೆಸಿಕೊಳ್ಳಲು ಹುರಿದುಂಬಿಸಿದರು.
ಸಮಾಜವಿಜ್ಞಾನ ಶಿಕ್ಷಕ ವಿಕಾಸ್ ರಾಜ್, ಆಂಗ್ಲಭಾಷಾ ಶಿಕ್ಷಕ ಶಿವಕುಮಾರ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕವೀಶ್, ಶಿಕ್ಷಕಿ ಕುಮಾರಿ ಆಶ್ರಿತಾ ಇದ್ದರು.
Related Stories
September 6, 2024