ವೈದ್ಯರು ಸಮಾಜದ ಅರೋಗ್ಯ ರಕ್ಷಣೆಯ ಜವಾಬ್ದಾರಿ ಹೊತ್ತು ನೆಡೆದಾಡುವ ದೇವರು ಎಂದರೆ ತಪ್ಪಾಗಲಾರದು ಎಂದು ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಸಿ ಆರ್ .ಮೋಹನ್ ಕುಮಾರ್ ಹೇಳಿದರು.
ಡಾ.ಬಿ ಸಿ ರಾಯ್ ರವರ ಜನ್ಮದಿನದ ಪ್ರಯುಕ್ತ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ಆಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ದೀರ್ಘ ಕಾಲದ ವೈದ್ಯಕೀಯ ಶಿಕ್ಷಣ. ಅನಂತರ ಸಾಧ್ಯ ವಾದಷ್ಟು ಕಾಲ ಸಮರ್ಪಣಾ ಭಾವ ದಿಂದ ರೋಗಿಗಳ ಸೇವೆ ಮಾಡುತ್ತಾ ಅದರಲ್ಲೂ ತೃಪ್ತಿ ಸಂತೋಷ ವನ್ನು ಕಾಣುವ ವೈದ್ಯರು ವೈದ್ಯೋನಾರಾಯಣೋ ಹರಿ ಎನ್ನುವ ನುಡಿಗೆ ಅನ್ವರ್ಥರು ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಕುಕ್ಕೋಡು ಗಣೇಶ್ ಮಾತನಾಡಿ ವೈದ್ಯರು ಮತ್ತು ರೋಗಿಗಳ ನಡುವೆ ವಿಶ್ವಾಸ ಹಾಗು ಪರಸ್ಪರ ಗೌರವ ಅತೀ ಮುಖ್ಯ ಎಂದರು.
ಕಳಸ ಪಟ್ಟಣದ ನಾಟಿ ವೈದ್ಯ ರಾದ ಶ್ರೀ ಶ್ರೀನಿವಾಸ್ ಭಟ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಪಿಎಸ್ ಪ್ರೌಢ ಶಾಲೆ ಶಿಕ್ಷಕರಾದ ಶೃಂಗೇಶ್ವರ್, ಸಂದೇಶ್ ಆಚಾರ್ಯ,ಅಶೋಕ್ , ಮತ್ತು ವಿದ್ಯಾ ಕೆ ವಿ, ರಾಜು, ಶ್ರೀನಿಧಿ, ಮುರುಳಿ, ಗಜೇಂದ್ರ ಇದ್ದರು.