ರಾಜಸ್ಥಾನದ ಉದಯಪುರದಲ್ಲಿ ನೂಪೂರು ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಕನ್ನಯ್ಯಾ ಹತ್ಯೆಯನ್ನು ಖಂಡಿಸಿ ಕಳಸ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ತು ಬಜರಂಗದಳ ಕಳಸ ಪ್ರಖಂಡ ಗುರುವಾರ ಪ್ರತಿಭಟನೆ ನಡೆಸಿದರು.
ಕಳಸ ಮುಖ್ಯ ರಸ್ತೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯ ಮುಖಂತರ ಸಾಗಿ ನಂತರ ಪೊಲೀಸ್ ಠಾಣೆ ಸಮೀಪ ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ಮಾಡಿ ಕೆಲ ಕಾಲ ರಸ್ತೆ ತಡೆ ನಡೆಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಅಜಿತ್, ಬಿಜೆಪಿ ಕಳಸ ಅಧ್ಯಕ್ಷ ನಾಗಭೂಷನ್, ಮುಖಂಡರಾದ ದೀಪಕ್ ದೊಡ್ಡಯ್ಯ, ಸಂತೋಷ್ ಬೆಟಗೆರೆ, ರಂಗನಾಥ್, ಕಾರ್ತಿಕ್ ಶಾಸ್ತ್ರೀ, ಎಂ.ಎ.ಶೇಷಗಿರಿ, ಶ್ರೀಕಾಂತ್, ಬಿ.ಕೆ.ಮಹೇಶ್, ನಾಗೇಶ್ ಭಟ್, ಬಾಲಕೃಷ್ಣ ಪ್ರಭು ಇದ್ದರು.
Related Stories
September 6, 2024