ಕಳಸ ತಾಲೂಕಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಡಾ|ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ)ಬಣ ಇವರು ಅಭಿನಂದಿಸಿದರು.
ಕಳಸ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಮಾವಿನಕೆರೆ ಎಸ್ಟೇಟ್ನ ಪಾಲುದಾರರಾದ ಪ್ರಭುದಾಸ್ ಕೊಟೆಚಾ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸದಾ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದರು.
10ನೇ ತರಗತಿಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ತೇಜಸ್ಸ್ ಕೆ.ಎಸ್, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ನಿಶ್ಮಿತಾ ಮತ್ತು ರಂಜಿತ ಇವರನ್ನು ಅಭಿನಂದಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಶಿಕ್ಷಕರನ್ನು ಗೌರವಿಸಲಾಯಿತು.
ಡಾ|ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು,ಶಾಲಾ ಶಿಕ್ಷಕರಾದ ಶಿವಪ್ಪ,ಸಂದೇಶ್,ಶಿವಕುಮಾರ್,ಕರವೇ ಅಧ್ಯಕ್ಷ ಪೂರ್ಣೇಶ್,ಚೌಡಯ್ಯ,ಶಾಮಚಾರ್, ಮಂಜು ಗಬ್ಗಲ್,ಶೇಖರ ಶೆಟ್ಟಿ,ಸಚಿನ್ ಗಬ್ಗಲ್,ಅಶೋಕ ಇದ್ದರು.