ಅಧಿಕಾರಿಗಳಿಗೆ ಇರೋಕೆ ಮನೆ, ಕುಡಿಯೋಕೆ ಫಿಲ್ಟರ್ ನೀರು ಆದರೆ ನಮ್ಮಂತ ಬಡವರನ್ನು ಹೇಳೋರು ಕೇಳೋರು ಯಾರೂ ಇಲ್ಲ.
ಇದು ಸೋಮವಾರ ನಿವೇಶನದ ಹಕ್ಕುಪತ್ರಕ್ಕಾಗಿ ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಕುಸುಮಾ ಅವರ ಮಾತು.
ಪ್ರತಿಭಟನೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಬನ್ನಿ ನಮ್ಮ ಟೆಂಟ್ ನಲ್ಲಿ ಒಂದು ದಿನ ವಾಸ ಮಾಡಿ ನೋಡಿ ಗೊತ್ತಾಗುತ್ತದೆ.ಮೂರು ವರ್ಷದಿಂದ ವಯಸ್ಸಿಗೆ ಬಂದ ಹೆಣ್ಮಕ್ಕಳಿಗೆ ಬೆಳಿಗ್ಗೆದ್ದು ಚೊಂಬು ಕೊಟ್ಟು ಕಳುಹಿಸುವಂತ ಹಿನಾಯ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ.ಓಟು ತೆಗೆದುಕೊಳ್ತಾರೆ ಮನೆಯಲ್ಲಿ ಬೆಚ್ಚಗೆ ಮಲಗ್ತಾರೆ.ನಾಯಿಗಾದರೂ ಮಾಂಸ ತಂದು ಹಾಕ್ತಾರೆ ಆದರೆ ನಮ್ಮನ್ನು ನಾಯಿಗಿಂತಲೂ ಕೆಟ್ಟದಾಗಿ ನೋಡಿಕೊಳ್ತಾರೆ ಇದೇನಾ ನಿಮ್ಮ ಸರ್ಕಾರ.ಇದೇನಾ ನಿಮ್ಮ ಆಡಳಿತ ಎಂದು ಅಧಿಕಾರಿಗಳನ್ನು ನಿವೇಶನ ರಹಿತ ಮಹಿಳೆ ಕುಸುಮ ತಮ್ಮ ಆಕ್ರೋಶವನ್ನು ಕಳಸ ತಾಲೂಕು ತಹಶಿಲ್ದಾರ್ ನಂದ ಕುಮಾರ್ ಮುಂದೆ ವ್ಯಕ್ತಪಡಿಸಿದರು.